ಭಯ ಪುರಾಣ

ಭಯಕೆ ನಾನಾ ರೂಪಗಳ ಕೊಟ್ಟು
ಬಂಗಾರ ಬೆರಳುಗಳಿಂದ ಅಲಂಕರಿಸಿ
ಕಳ್ಳರ ಭಯಕ್ಕೆ ಭದ್ರವಾಗಿ ಬೀಗ ಜಡಿದು ಕುಳ್ಳರಿಸಿ
ಮಾರಿ ಕಾಲರಾ ಭಯ, ರೋಗ ರುಜಿನ ಭಯ
ಸಾವು ವೈರಿಗಳ ಭಯ ಮೊದಲಾದ ಅನೇಕ ಭಯಗಳು
ದೂರಾಗಲೆಂದು ಭಯದಿಂದ ಅಡ್ಡ ದಿಡ್ಡ ಬೋರಲು
ಬಿದ್ದು ಬೇಡುತ್ತೇವೆ
ಕತ್ತಲೆಯು ಕತ್ತಲೆಯನ್ನು ಹಡೆದಂತೆ
ಭಯವು ಭಯವನ್ನೇ ಹಡೆಯುತ್ತ ಹಡೆಯುತ್ತ
ದೇಶದಲ್ಲೆಲ್ಲಾ ಭಯದ ಹುಳುಗಳೇ ತುಂಬಿವೆ
ಭಯದ ಕೊಳ ಪಾಚಿಗಟ್ಟಿದೆ
ಅದರಲ್ಲೇ ಶಾಶ್ವತ ಕೊಳೆಯಲು
ಭಯಾನಕ ಅದ್ಭುತ ಗೊಳ್ಳು ಪುರಾಣಗಳು ಸಂಕೀರ್ತನೆಗಳು
ಕೊಳೆ ಹೊಳೆ ನಿರಂತರ ಹರಿದಿವೆ
ಭಯದಿಂದ ಅದನ್ನು ಕೇಳುತ್ತ ಕೇಳುತ್ತ
ಪ್ರಶ್ನೆ ಮಾಡುವ ಶಕ್ತಿ ಸತ್ತು ಹೋಗಿದೆ
ಭಯದ ಪಾಳುಬಾವಿ ಎಂದೆಂದೂ ಬತ್ತದಂತೆ
ವಟಗುಟ್ಟುವ ಕಪ್ಪೆಗಳು ಹೊಟ್ಟೆ ಬೆಳೆಸಿಕೊಳ್ಳುತ್ತವೆ
ಶರಣಾಗಿ ತಲೆಬಾಗದವರನ್ನು
ರಕ್ತ ಕಾರಿಸಿ ಕೊಲ್ಲುತ್ತವೆ
ಅವರ ಮಕ್ಕಳ ಮರಿ ಕಬಳಿಸುತ್ತವೆ
ಎಂದೇನೇನೋ ನಿಗೂಢ ಭಯಗಳು
ರಾಜ ಮರ್ಯಾದೆಯ ಷೋಡಶೋಪಚಾರ ಶೃಂಗಾರಗಳೆಲ್ಲ
ದೇವರೆಂಬ ಗೊಂಬೆಗಳಿಗೆ ಬೇಕು
ಹೆಣ ಸಿಂಗಾರವಲ್ಲದೆ ಬೇರೆ ಫಲವಿಲ್ಲ
ಹೊಗಳಿಕೆಗೆ ಬಾಯಿ ಬಿಡುವ ಅವು
ತೆಗಳುವವರ ಶಿಕ್ಷಸದೆ ಬಿಡುವುದಿಲ್ಲ
ಅವನ್ನು ಒಲಿಸಿಕೊಳ್ಳಲು ಪ್ರಾರ್ಥನೆ ಕೀರ್ತನೆ
ವಾದ್ಯಗಳ ಮೊರೆತ ಬೆಂಕಿಹಾರಾಟ
ಮುಂತಾದ ಭಯಾನಕಗಳು
ಕುರಿ ಕೋಣಗಳ ಬಲಿಯನ್ನು
ಕೆಲವು ಕೇಳುತ್ತವೆ ಶಾಖಾಹಾರಿಗಳು
ಇನ್ನೂ ಕೆಲವು ಸಸ್ಥಾಹಾರಿಗಳು
ಅವಕ್ಕೆ ನವರಸ ಭಕ್ಷ್ಯ ಭೋಜ್ಯಗಳು ಬೇಕು
ದೈವ ಸಾಕ್ಷಾತ್ಕಾರಕ್ಕೆ ತಾವೇ ಪರವಾನಿಗೆದಾರರೆಂದು
ಮೆರೆಯುವ ಬಗೆಬಗೆಯ ಗುರು ಜಗದ್ಗುರುಗಳಿಗೆ
ಬುದ್ದೀ ಸ್ಥಾಮೀ ಎಂದು ಭಯದಿಂದ ಅಡ್ಡ ಬೀಳಬೇಕು
ರಾಜರ ಮೆರೆದಾಟ ವೈಭವಗಳೆಲ್ಲ ಈ ಸನ್ಯಾಸಿಗಳಿಗೂ ಬೇಕು
ಯಾವುದೋ ಪುಣ್ಯಾತ್ಮನ ಹೆಸರಿನಲ್ಲಿ ಮಠಗಳು
ಅವುಗಳಲ್ಲಿ ಗದ್ದುಗೆಯೇರಿದ ಹದ್ದುಗಳು ಮರ್ಕಟಗಳು
ಹೀಗೆ ಗುಡಿ ಮಠ ಜಾತ್ರೆ ಪೂಜೆ ಪುರಾಣಾದಿ
ಕೊಳಚೆಯ ಪ್ರವಾಹದಲ್ಲಿ ಮುಳಿಗೇಳುತ್ತ
ಮತ್ತೆ ಮತ್ತೆ ಮತ್ತೇರಿ ಮುಳುಗಿ
ಹೆಣಗಳಾಗಿ ಹೋಗಿರುವ ನನ್ನ ಜನರೇ
ಸಾಕಿನ್ನು ಭಯಾವಳಿ ಭವಾವಳಿಗಳ
ಬೆಂಡು ಬೆಂಡಾದ ತುಂಡು ತುಂಡಾದ ಬೀಳು ಬಾಳುಗಳು
ಭಯವನ್ನೇ ತುಂಬಿ ಬೆಳಸುತ್ತಾ ಬಂದ
ಪುರಾಣ ಕಂತೆಗಳ ಕಟ್ಟಿಟ್ಟು ಬಿಡಿ
ಇಲ್ಲಾ ತಿಪ್ಪೆಗೆಸೆದು ಬಿಡಿ
ಭಯದ ಕೋಟೆಗಳಂತಿರುವ ಗುಡಿ ಗುಂಡಾರಗಳ
ಮ್ಯೂಜಿಯಮ್ಮುಗಳಾಗಿ ಮಾಡಿ
ಗೊಂಬೆಗಳ ಮಕ್ಕಳಿಗೆ ಕಲೆಗಾಗಿ ತೋರಿಸಿ
ಜನರ ಭಯದ ಆಧಾರದ ಮೇಲೆ ಬೊಚ್ಚು ಬೆಳೆಸಿರುವ
ಮಠಾಧೀಶ್ವರ ಪೂಜಾರಿ ಬಾಬಾಗಳನ್ನಲ್ಲ
ಹೊಲ ಗದ್ದೆ ತೋಟ ಕಟ್ಟಡ ಕಾರ್ಖಾನೆಗಳಿಗೆ
ಎಳೆ ತಂದು ದುಡಿಯ ಹಚ್ಚಿರಿ ನಮ್ಮ ನಿಮ್ಮಂತೆ
ಜಾತ್ರೆ ಪರಿಷೆಗಳನ್ನೆಲ್ಲ ಜನ ಬಾಳಲು ನೆರವಾಗುವ
ಜಾನಪದ ಕುಶಲ ಕಲಾಮೇಳಗಳನ್ನಾಗಿ ಮಾಡಿ
ದೇವರು ಮೈಯಲ್ಲಿ ಬರುವ ಭಕ್ತಿಯಾವೇಶದ ಭ್ರಮಿಷ್ಟರನ್ನು
ಹುಚ್ಚಾಸ್ಪತ್ರೆಗಳಿಗೆ ಸೇರಿಸಿ ತಲೆ ಸರಿಮಾಡಿ
ಮಠಗಳನ್ನೆಲ್ಲಾ ಕಾಯಕ ಕೇಂದ್ರಗಳನ್ನಾಗಿ ಪರಿವರ್ತಿಸಿ
ಮಾನವ, ಮಾನವ ಚೈತನ್ಯ, ಮಾನವತೆಯನ್ನು ಬಿಟ್ಟು
ಬೇರೆ ದೇವರಿಲ್ಲ ಕಾಣಿರೋ .

ಭಯದ ಕೂಸುಗಳಾದ ಚಿಲ್ಲರೆ ದೇವರುಗಳನ್ನು
ಆ ಚಿಲ್ಲರೆಗಳ ಮೇಲೆ ಹೊಟ್ಟೆ ಹೊರೆಯುವ
ಪರೋಪಜೀವಿ ಬುರುಸುಗಳನ್ನು ಕೊಳೆಯನ್ನೆಲ್ಲ
ಸಾರಾಸಗಟಾಗಿ ತೊಳೆಯಿರಿ
ಭಯವಿಲ್ಲದ ಮಾನವರಾಗಿ ಬೆಳೆಯಿರಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post “ಕಲಾ ವಿನ್ಯಾಸಗಳು”
Next post ಟೋಸ್ಟರಿನ ಗರಂ

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

cheap jordans|wholesale air max|wholesale jordans|wholesale jewelry|wholesale jerseys